ನಟಿ ಸಂಗೀತಾ ಭಟ್‌ಗೆ ಆಪರೇಷನ್! ಕಾರಣವೇನು ಗೊತ್ತಾ?

ನಟಿ ಸಂಗೀತಾ ಭಟ್ ಆಸ್ಪತ್ರೆಯಲ್ಲಿ; ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡಿದ ಕನ್ನಡ ನಟಿ

ಹಾಯ್ ಫ್ರೆಂಡ್ಸ್… ನಮ್ಮ ಸ್ಯಾಂಡಲ್‌ವುಡ್ ನಟಿ ಸಂಗೀತಾ ಭಟ್ ಇದ್ದಕ್ಕಿದ್ದಂತೆ ಒಂದು ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ‘ನನಗೆ ಒಂದು ಆಪರೇಷನ್ ಆಗಿದೆ’ ಅಂತ ಸೋಷಿಯಲ್ ಮೀಡಿಯಾದಲ್ಲಿ ಓಪನ್ ಆಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅವರಿಗೇನಾಗಿತ್ತು? ಇದು ಕೇವಲ ಸಿನಿಮಾ ಸುದ್ದಿ ಅಲ್ಲ, ಪ್ರತಿಯೊಬ್ಬ ಹೆಣ್ಣುಮಕ್ಕಳೂ ತಿಳಿಯಲೇಬೇಕಾದ ಒಂದು ಪ್ರಮುಖ ಕಥೆ. ಮಿಸ್ ಮಾಡ್ಕೋಬೇಡಿ!

“ಇದೆಲ್ಲಾ ಕಾಮನ್ ನೋವು” ಅಂದ್ಕೊಂಡಿದ್ದೇ ಮುಳುವಾಯ್ತು!

ಹೌದು, ನಟಿ ಸಂಗೀತಾ ಭಟ್ ಅವರಿಗೆ ಕಳೆದ ಕೆಲವು ಸಮಯದಿಂದ ಪೀರಿಯಡ್ಸ್ ಟೈಮ್‌ನಲ್ಲಿ ಸಿಕ್ಕಾಪಟ್ಟೆ ನೋವು ಕಾಣಿಸಿಕೊಳ್ತಿತ್ತಂತೆ. ಜೊತೆಗೆ, ಋತುಚಕ್ರ ಕೂಡ ಸರಿಯಾದ ಸಮಯಕ್ಕೆ ಆಗ್ತಿರಲಿಲ್ಲ. ಆದ್ರೆ ಸಂಗೀತಾ, ‘ಅಯ್ಯೋ, ಇದೆಲ್ಲಾ ಹೆಣ್ಣುಮಕ್ಕಳಿಗೆ ಕಾಮನ್ ಬಿಡು’ ಅಂತ ಲೈಟ್ ಆಗಿ ತಗೊಂಡಿದ್ದಾರೆ. ಅಷ್ಟೇ ಅಲ್ಲ, ಮೊದಲು ಒಬ್ಬ ಡಾಕ್ಟರ್ ಹತ್ರ ಹೋದಾಗ ಅವರೂ ‘ಇದು ಸಾಮಾನ್ಯ’ ಅಂದ್ಬಿಟ್ಟರಂತೆ. ಆದ್ರೂ ಸಂಗೀತಾ ಅವರಿಗೆ ಯಾಕೋ ಒಳಗೊಳಗೆ ಸಮಾಧಾನ ಇರಲಿಲ್ಲ.

Also Read

ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ಶಾಕ್!

ತಮ್ಮ ಮನಸ್ಸಿನ ಮಾತು ಕೇಳಿ, ಸಂಗೀತಾ ಅವರು ಬೇರೊಬ್ಬ ಎಕ್ಸ್‌ಪರ್ಟ್ ಡಾಕ್ಟರ್ ಹತ್ರ ಹೋಗಿ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಆಗಲೇ ನೋಡಿ ಅಸಲಿ ವಿಷಯ ಬಯಲಾಗಿದ್ದು! ಅವರ ಗರ್ಭಕೋಶದಲ್ಲಿ (Uterus) ಒಂದು ಸಣ್ಣ ಗಡ್ಡೆ (Polyp) ಬೆಳೆದಿರುವುದು ಗೊತ್ತಾಗಿದೆ. ಸುಮಾರು 1.75 cm ಅಷ್ಟು ದೊಡ್ಡದಿದ್ದ ಆ ಗಡ್ಡೆಯೇ ಈ ಎಲ್ಲಾ ನೋವು, ಹಾರ್ಮೋನ್ ಏರುಪೇರು, ತೂಕ ಹೆಚ್ಚಾಗೋದು ಮತ್ತು ಕೂದಲು ಉದುರುವ ಸಮಸ್ಯೆಗೆ ಕಾರಣವಾಗಿತ್ತು.

ಕೊನೆಗೂ ಆಯ್ತು ಆಪರೇಷನ್!

ತಮ್ಮ ‘ಕಮಲ್ ಶ್ರೀದೇವಿ’ ಸಿನಿಮಾ ರಿಲೀಸ್ ಇದ್ದಿದ್ದರಿಂದ ಸಂಗೀತಾ ಅವರು ಆಪರೇಷನ್ ಅನ್ನು ಸ್ವಲ್ಪ ಮುಂದಕ್ಕೆ ಹಾಕಿದ್ರಂತೆ. ಆದರೆ, ಇತ್ತೀಚೆಗೆ ನೋವು ಜಾಸ್ತಿಯಾದಾಗ ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ‘ಹಿಸ್ಟ್ರೋಸ್ಟೋಫಿಕ್ ಪಾಲಿಪೆಕ್ಟ್ರೊಮಿ’ ಅನ್ನೋ ಒಂದು ಸಣ್ಣ ಸರ್ಜರಿ ಮೂಲಕ (ಅಂದ್ರೆ, ಹೊಟ್ಟೆ ಏನೂ ಕಟ್ ಮಾಡದೆ) ಆ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದಿದ್ದಾರೆ. ಸದ್ಯ ಸಂಗೀತಾ ಅವರು ಆರಾಮಾಗಿದ್ದಾರೆ, ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ. ಪತಿ ಸುದರ್ಶನ್ ಅವರು ಪತ್ನಿಯ ಜೊತೆಯಲ್ಲೇ ಇದ್ದು ಆರೈಕೆ ಮಾಡುತ್ತಿದ್ದಾರೆ.

ಇದು ಬರೀ ಸುದ್ದಿ ಅಲ್ಲ, ಇದೊಂದು ಪಾಠ!

ನಿಜ ಹೇಳಬೇಕು ಅಂದ್ರೆ, ಸಂಗೀತಾ ಈ ವಿಷಯವನ್ನು ಯಾರ ಹತ್ರನೂ ಹೇಳಿಕೊಳ್ಳದೆ ಮುಚ್ಚಿಡಬಹುದಿತ್ತು. ಆದ್ರೆ, ಅವರು ಓಪನ್ ಆಗಿ ಯಾಕೆ ಹೇಳಿಕೊಂಡ್ರು ಗೊತ್ತಾ? ಬೇರೆ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸೋಕೆ. ನಮ್ಮ ಸಮಾಜದಲ್ಲಿ ಇವತ್ತಿಗೂ ಎಷ್ಟೋ ಹೆಣ್ಣುಮಕ್ಕಳು ಇಂಥಾ ನೋವನ್ನು ‘ಇಷ್ಟೇ ಬಿಡು’ ಅಂತ ಸಹಿಸಿಕೊಂಡು, ಡಾಕ್ಟರ್ ಹತ್ರ ಹೋಗೋದೇ ಇಲ್ಲ. ಸಂಗೀತಾ ಹೇಳೋದು ಒಂದೇ ಮಾತು:

  • “ದಯವಿಟ್ಟು ಮುಟ್ಟಿನ ನೋವನ್ನು ನಿರ್ಲಕ್ಷ್ಯ ಮಾಡಬೇಡಿ.”
  • “ಅತಿಯಾದ ನೋವು ‘ಸಾಮಾನ್ಯ’ ಅಲ್ಲ, ಅದರ ಹಿಂದೆ ಕಾರಣ ಇರುತ್ತೆ.”
  • “ಸ್ವಲ್ಪ ಅನುಮಾನ ಬಂದ್ರೂ ತಕ್ಷಣ ಡಾಕ್ಟರ್ ಹತ್ರ ಹೋಗಿ, ಚೆಕ್ ಮಾಡಿಸಿಕೊಳ್ಳಿ.”
  • “ಸರಿಯಾದ ಟೈಮ್‌ಗೆ ಚಿಕಿತ್ಸೆ ಸಿಕ್ಕರೆ, ದೊಡ್ಡ ಸಮಸ್ಯೆಯಿಂದ ಪಾರಾಗಬಹುದು. ಇಲ್ಲದಿದ್ರೆ ಇದೇ ಮುಂದೆ ಕ್ಯಾನ್ಸರ್ ಅಥವಾ ಬಂಜೆತನದಂತಹ ದೊಡ್ಡ ಕಾಯಿಲೆಗೂ ಕಾರಣವಾಗಬಹುದು.”
Also Read

ಒಟ್ಟಿನಲ್ಲಿ, ಸಂಗೀತಾ ಭಟ್ ಅವರು ಈಗ ಆರಾಮಾಗಿದ್ದಾರೆ. ತಮಗಾದ ಅನುಭವದಿಂದ ನಾಲ್ಕು ಜನಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದಾರೆ. ಒಬ್ಬ ನಟಿಯಾಗಿ ಇಷ್ಟು ಧೈರ್ಯವಾಗಿ ತಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ಮಾತಾಡಿದ್ದಕ್ಕೆ ಅವರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.

ಅಂದಹಾಗೆ, ಸೆಲೆಬ್ರಿಟಿಗಳು ತಮ್ಮ ಆರೋಗ್ಯದ ಬಗ್ಗೆ ಈ ರೀತಿ ಓಪನ್ ಆಗಿ ಮಾತಾಡೋದು ಎಷ್ಟರಮಟ್ಟಿಗೆ ಸರಿ? ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *